Thursday, May 28, 2020

ಸಲ್ಲಾಪ ೨೦

ಸಲ್ಲಾಪ

ನಂದಳಿಕೆಯ ನಾರಣಪ್ಪನು
ಹೊಸಗನ್ನಡದ ಮುಂಗೋಳಿ !
ರಾಮಾಶ್ವಮೇಧ ಪಟ್ಟಾಭಿಷೇಕ
ಸುಂದರ ಕಾವ್ಯದ ಕತೆಕೇಳಿ !

ನೀರು ಇಳಿಯದ ಗಂಟಲಿನಲ್ಲಿ
ಕಡಬು ತುರುಕುವುದೇಕಂತೆ !
ಹೃದಯ ಮನೋರಮೆ ರೂಪವ ತಾಳಿ
ಪ್ರಶ್ನೆ ಮಾಡಿದಳೀ ಕಾಂತೆ !

ದೈಹಿಕ ಶಿಕ್ಷಕ ಮಾಡಿಸಿಬಿಟ್ಟನು
ಪದಪದಗಳಿಗೂ ವ್ಯಾಯಾಮ !
ಗದ್ಯ ಹೃದ್ಯದ ಸವಿರುಚಿ ಸೃಷ್ಟಿಯು
ಭಾಷೆಗೆ ನವೀನ ಆಯಾಮ !

ಪರಂಪರೆಯನು ಮುರಿದು ಕಟ್ಟಲು
ತೆರೆಯಿತು ವಾಙ್ಮಯ ರಹದಾರಿ !
ಮುದ್ದಣ ನಾಮವು ಅಮರವಾಯಿತು
ಓದುಗರೆಲ್ಲರ ಮನಸೇರಿ !

ಕಾವ್ಯಕೆ ಹೊಸತು ವ್ಯಾಖ್ಯೆಯ ನೀಡಿತು
ಗಂಡ ಹೆಂಡತಿ ಸಲ್ಲಾಪ !
ಕವಿ ಓದುಗರ ಸಹಜ ಬಂಧದ
ಜೀವ ಸಂವೇದನೆ ಪ್ರತಿರೂಪ !

ಚಂದ್ರಗೌಡ ಕುಲಕರ್ಣಿ
೨೦-೦೫-೨೦

No comments: