ರಾಮನಾಥನ ಮೆರೆದವ
ಮೊದಲ ವಚನಕಾರನೆಂಬ
ಬಿರುದು ಪಡೆದನು ದಾಸಯ್ಯ !
ಬಿಸಿಲು ನಾಡು ಮುದ್ದನೂರಿನ
ಹಿರಿಯ ಭಕುತನು ದಾಸಯ್ಯ !
ಸಿರಿಯನಿತ್ತರೂ ಕರಿಯನಿತ್ತರೂ
ಒಪ್ಪಿಕೊಳ್ಳದ ದಾಸಯ್ಯ !
ಶರಣ ಸೂಳ್ನುಡಿ ಗಳಿಗೆ ಇತ್ತರೂ
ಅಪ್ಪಿಕೊಳ್ಳುವ ದಾಸಯ್ಯ !
ಹಸಿವ ಒಡಲಿಗ ಹುಸಿವ ಒಡಲಿಗ
ಎಂಬ ದಿಟವನು ನುಡಿದವನು !
ಹರಿದ ಗೋಣಿಗೆ ಕಳವೆ ತುಂಬುವ
ಅಳಿಯ ಮನವನು ತಡೆದವನು !
ಇಳೆಯು ನಿಮ್ಮದು ಬೆಳೆಯು ನಿಮ್ಮದು
ವಾಯು ನಿಮ್ಮದು ಎಂದವನು !
ಹಸಿವೆ ಹಾವು ಬಸಿರು ಹೊಕ್ಕರೆ
ವಿಷದ ನೋವಿಗೆ ಬೆಂದವನು !
ಇಲಿಯ ಕಂಡಡೆ ಪುಟಿದು ನೆಗೆಯುವ
ಮಠದ ಬೆಕ್ಕನು ಜರೆದವನು !
ಸಟೆಯ ಭಕುತಿಗೆ ದಿಟವ ಸ್ಪರ್ಶಿಸಿ
ರಾಮನಾಥನ ಮೆರೆದವನು !
ಚಂದ್ರಗೌಡ ಕುಲಕರ್ಣಿ
೨೫-೦೫-೨೦೨೦
No comments:
Post a Comment