ಬೆರೆಸಲು ತಣ್ಣೀರ್ ಎಲ್ಲಿ !
ಅಭಿನವ ಪಂಪ ಕವಿಯು ಬರೆದ
ರಾಮಚಂದ್ರ ಚರಿತ !
ಹೃದಯ ತೆರೆದು ಓದಲು ಸಾಕು
ಅರಿವೆವು ಕಾವ್ಯದದ್ಭುತ !
ಚಳನಯನದ ಸೀತೆಯ ಚಲುವಿಗೆ
ಲಂಕೆಯ ರಾವಣ ಸೋತ !
ಕಮಲ ದಳದ ನೀರ್ ಹನಿಯಂತೆ
ಚಂಚಲವಾಯಿತು ಚಿತ್ತ !
ಸಾಗರ ಜಲವೆ ಬಿಸಿಬಿಸಿಯಾದರೆ
ಬೆರೆಸಲು ತಣ್ಣೀರ್ ಎಲ್ಲಿ !
ದಾರಿ ತಪ್ಪಿದ ರಾಜಗೆ ಬುದ್ಧಿಯ
ಹೇಳುವರಾರು ಅಲ್ಲಿ !
ಕದಡಿದ ನೀರು ತಿಳಿಯಾಗುವುದು
ಪ್ರಕೃತಿ ಸಹಜ ಲೀಲೆ !
ರಾವಣ ಮನಸು ನಿರ್ಮಲವಾಯಿತು
ಕಾಲ ಮುಗಿದ ಮೇಲೆ !
ರಾಮನ ಗೆದ್ದು ಸೀತಾ ದೇವಿಯ
ಕಾಣಿಕೆ ಕೊಡಬೇಕೆಂದ !
ದೈವ ಲೀಲೆ ಸಮರದಿ ಸೋತು
ಮರಣದ ಗತಿಗೆ ಸಂದ !
***
೨೩-೦೫-೨೦೨೦
No comments:
Post a Comment