ಸಲ್ಲಾಪ
ನಂದಳಿಕೆಯ ನಾರಣಪ್ಪನು
ಹೊಸಗನ್ನಡದ ಮುಂಗೋಳಿ !
ರಾಮಾಶ್ವಮೇಧ ಪಟ್ಟಾಭಿಷೇಕ
ಸುಂದರ ಕಾವ್ಯದ ಕತೆಕೇಳಿ !
ನೀರು ಇಳಿಯದ ಗಂಟಲಿನಲ್ಲಿ
ಕಡಬು ತುರುಕುವುದೇಕಂತೆ !
ಹೃದಯ ಮನೋರಮೆ ರೂಪವ ತಾಳಿ
ಪ್ರಶ್ನೆ ಮಾಡಿದಳೀ ಕಾಂತೆ !
ದೈಹಿಕ ಶಿಕ್ಷಕ ಮಾಡಿಸಿಬಿಟ್ಟನು
ಪದಪದಗಳಿಗೂ ವ್ಯಾಯಾಮ !
ಗದ್ಯ ಹೃದ್ಯದ ಸವಿರುಚಿ ಸೃಷ್ಟಿಯು
ಭಾಷೆಗೆ ನವೀನ ಆಯಾಮ !
ಪರಂಪರೆಯನು ಮುರಿದು ಕಟ್ಟಲು
ತೆರೆಯಿತು ವಾಙ್ಮಯ ರಹದಾರಿ !
ಮುದ್ದಣ ನಾಮವು ಅಮರವಾಯಿತು
ಓದುಗರೆಲ್ಲರ ಮನಸೇರಿ !
ಕಾವ್ಯಕೆ ಹೊಸತು ವ್ಯಾಖ್ಯೆಯ ನೀಡಿತು
ಗಂಡ ಹೆಂಡತಿ ಸಲ್ಲಾಪ !
ಕವಿ ಓದುಗರ ಸಹಜ ಬಂಧದ
ಜೀವ ಸಂವೇದನೆ ಪ್ರತಿರೂಪ !
ಚಂದ್ರಗೌಡ ಕುಲಕರ್ಣಿ
೨೦-೦೫-೨೦