Thursday, May 28, 2020

ಸಂಜೀವಿನಿ - ೭

ಸಂಜೀವಿನಿ

ದುರ್ಗಸಿಂಹನು ಪಂಚತಂತ್ರವ
ಕನ್ನಡಕಿಳಿಸಿದ ಧೀಮಂತ !
ಎಲ್ಲ ಪಾತ್ರದ ಗುಣದೋಷಗಳು
ನಮ್ಮೊಳು ಈಗಲೂ ಜೀವಂತ !

ವ್ಯಸನಿ ಕುವರರು ಚತುರರಾದರು
ಅಮರ ಕತೆಗಳ ಕೇಳುತ್ತ !
ಕರಟಕ ದಮನಕ ಬುದ್ಧಿಯ ತೊರೆದರು
ಅರಿಯುತ ಬಾಳಿನ ನಿಜಸತ್ವ !

ಸಿಂಹ ಎತ್ತು ಮಂಗ ಹಾವು
ಮನುಜ ಸ್ವಭಾವದ ಪ್ರತಿರೂಪ !
ಪ್ರತಿ ಉತ್ಪನ್ನ ಮತಿಯು ಇರದಿರೆ
ಬದುಕೆ ಒಂದು ಜಡಕೂಪ !

ಕಾಶ್ಮೀರ ರಾಜ ಇರಾನ ದೊರೆಗೆ
ಕೊಟ್ಟು ಕಳಿಸಿದ ಕೃತಿರತುನ !
ಚಂಪು ಕಾವ್ಯದಿ ಅಡಗಿದೆ ವಿಶ್ವದ
ಸಂಜೀವಿನಿಯ ಮಹಾಕಥನ !

ಕತೆಯನು ಹೇಳುವ ಕೇಳುವ ಯಾನಕೆ
ಕೊನೆಯೆ ಇಲ್ಲವು ಎಂದೆಂದು !
ತುಂಟ ಮಕ್ಕಳ ಭಾವಕೆ ಹಿಡಿಸುವ
ಬಿಂದು ರೂಪದ ಮಾಸಿಂಧು !

ಚಂದ್ರಗೌಡ ಕುಲಕರ್ಣಿ
೨೦-೦೫-೨೦

No comments: