ವಸುಧಾವಲಯ ಕನ್ನಡ
ಪದವನು ಅರಿತು ನುಡಿವ ಜನರನು
ಹೊಗಳಿ ಹಾಡಿದ ಶ್ರೀವಿಜಯ !
ಕುರಿತು ಓದದೆ ಕಾವ್ಯ ಕಟ್ಟುವ
ಪ್ರತಿಭೆಗೆ ಕೊಟ್ಟ ಮನ್ನಣೆಯ !
ಮೊತ್ತಮೊದಲಿಗೆ ಶೋಧಿಸಿಕೊಟ್ಟ
ವಸುಧಾವಲಯ ಕನ್ನಡವ !
ಗೋದಾವರಿಯ ತಟದ ಅಂಚಿಗೆ
ಹಬ್ಬಿದ ನಾಡಿನ ವಿಸ್ತರವ !
ಕಿಸುವೊಳಲಿಂದ್ ಒಕ್ಕುಂದ್ ವರೆಗಿನ
ಕೊಪಣ ಫುಲಿಗೆರೆ ತಿರುಳನ್ನು !
ಕವಿಗೆ ತೋರಿದ ಕಾವ್ಯ ರಚಿಸುವ
ಅನನ್ಯ ಪ್ರತಿಭೆಯ ಕಲೆಯನ್ನು !
ತಿಳಿಸಿಕೊಟ್ಟನು ಕನ್ನಡ ಸಂಸ್ಕೃತ
ಸಹಜ ಬಂಧದ ರೂಪವನು !
ಕಾಲವು ಮರೆತ ಗದ್ಯ ಪದ್ಯದ
ಶ್ರೇಷ್ಠ ಕವಿಗಳ ಕೃತಿಗಳನು !
ಕಾವ್ಯ ಚಿಂತನ ಅಲಂಕಾರಕೆ
ಹಾಕಿದ ರಾಜ ಮಾರ್ಗವನು !
ನಿಜನಾಡವರಿಗೆ ಕವಿ ಓದುಗರಿಗೆ
ಹಂಚಿದ ವಾಙ್ಮಯ ಸಾರವನು !
***
೨೩-೦೫-೨೦೨೦
No comments:
Post a Comment