Thursday, May 28, 2020

ಕಲಿಯದವರ ಸುರಧೇನು - ೧೮

ಕಲಿಯದವರ ಸುರಧೇನು !

ಕನ್ನಡ ನಾಡಿನ ದೇಸಿ ನುಡಿಯಲಿ
ಮೂಡಿ ಬಂದಿದೆ ಈಕಥನ !
ಒಂದೇ ಉಸಿರಲಿ ಕಟ್ಟಿ ಕೊಟ್ಟವ
ಕೋಳಿವಾಡದ ನಾರಯಣ !

ಹಲಗೆ ಬಳಪವ ಹಿಡಿಯಲಾರದೆ
ಹುಟ್ಟು ಪಡೆಯಿತು ಭಾರತವು !
ಓದಿ ವಾಚಿಸಿ ಖುಷಿಪಡುತಿಹರು
ಅಖಂಡ ಮಂಡಲ ಈಜಗವು ! 

ಇಟ್ಟ ಪದವನು ಅಳಿಸಲಾರದ
ಶ್ರೇಷ್ಠ ಪ್ರತಿಭೆಯೆ ಸೋಜಿಗವು !
ಉಲಿಹು ಕೆಡಿಸದ ಬರಹ ಬಗೆಯನು
ಹೊಗಳುವುದಲ್ಲ ಮೂಜಗವು !

ಕೃಷ್ಣ ಕತೆಯನು ತಿಳಿಯ ಹೇಳಿದೆ
ಕುವರ ವ್ಯಾಸನ ಭಾಮಿನಿಯು !
ಕಾವ್ಯದೊಡಲಲಿ ತುಂಬಿ ತುಳುಕಿದೆ
ದ್ವಾಪರದುನ್ನತ ಸಂಸ್ಕೃತಿಯು !

ಕಲಿತ ಜನರಿಗೆ ಕಲ್ಪವೃಕ್ಷವು
ಕಲಿಯದವರಿಗೆ ಸುರಧೇನು !
ನುಡಿಯ ಕನ್ನಡ ಬೆಡಗಿನ ರೂಪವು
ಬೆರಸಿದಂತಿದೆ ಹಾಲ್ಜೇನು !

೧೭-೦೫-೨೦೨೦

No comments: