ಕಲಿಯದವರ ಸುರಧೇನು !
ಕನ್ನಡ ನಾಡಿನ ದೇಸಿ ನುಡಿಯಲಿ
ಮೂಡಿ ಬಂದಿದೆ ಈಕಥನ !
ಒಂದೇ ಉಸಿರಲಿ ಕಟ್ಟಿ ಕೊಟ್ಟವ
ಕೋಳಿವಾಡದ ನಾರಯಣ !
ಹಲಗೆ ಬಳಪವ ಹಿಡಿಯಲಾರದೆ
ಹುಟ್ಟು ಪಡೆಯಿತು ಭಾರತವು !
ಓದಿ ವಾಚಿಸಿ ಖುಷಿಪಡುತಿಹರು
ಅಖಂಡ ಮಂಡಲ ಈಜಗವು !
ಇಟ್ಟ ಪದವನು ಅಳಿಸಲಾರದ
ಶ್ರೇಷ್ಠ ಪ್ರತಿಭೆಯೆ ಸೋಜಿಗವು !
ಉಲಿಹು ಕೆಡಿಸದ ಬರಹ ಬಗೆಯನು
ಹೊಗಳುವುದಲ್ಲ ಮೂಜಗವು !
ಕೃಷ್ಣ ಕತೆಯನು ತಿಳಿಯ ಹೇಳಿದೆ
ಕುವರ ವ್ಯಾಸನ ಭಾಮಿನಿಯು !
ಕಾವ್ಯದೊಡಲಲಿ ತುಂಬಿ ತುಳುಕಿದೆ
ದ್ವಾಪರದುನ್ನತ ಸಂಸ್ಕೃತಿಯು !
ಕಲಿತ ಜನರಿಗೆ ಕಲ್ಪವೃಕ್ಷವು
ಕಲಿಯದವರಿಗೆ ಸುರಧೇನು !
ನುಡಿಯ ಕನ್ನಡ ಬೆಡಗಿನ ರೂಪವು
ಬೆರಸಿದಂತಿದೆ ಹಾಲ್ಜೇನು !
೧೭-೦೫-೨೦೨೦
No comments:
Post a Comment