Wednesday, May 27, 2020

ಅಂತರಂಗದ ರತುನ - ೧೧

ಅಂತರಂಗದ ರತುನ

ಕಳುವನು ಮಾಡದ ಹುಸಿಯನು ನುಡಿಯದ
ಅಂತರಂಗದ ರತುನ !
ಕೇಡಿಲ್ಲದಂತೆ ಒಲಿದು ಹಾಡಿದ
ಲಿಂಗ ಮೆಚ್ಚುವ ವಚನ !

ಸದುವಿನಯದಲಿ ಸವಿನುಡಿಗಳಲಿ
ಕೂಡಲ ಸಂಗನ ಸ್ಮರಣ !
ನಡೆದು ನುಡಿದ ನುಡಿನುಡಿಗಳಲಿ
ಜಂಗಮ ತತ್ವದ ಸ್ಫುರಣ !

ವಚನ ನಾಮಕೆ ಅಮೃತ ತುಂಬಲು
ಪಾವನ ಕಮಲಚರಣ !
ನುಡಿಯ ಮುತ್ತಿನ ಹಾರವೆ ಆದುದು
ಮಾಣಿಕ ದೀಪ್ತಿಯ ರಚನ !

ಜಗಮುಗಿಲಗಲವು ಮಿಗೆಯುಗದಾಳವು
ಕರಸ್ಥಲ ಲಿಂಗದಿ ಲೀನ !
ದೇಹವೆ ದೇಗುಲ ಶರವೆ ಕಳಸವು
ಪಡೆಯಲು ದೇವನ ಕರುಣ !

ಶರಣರ ಸಂಗದಿ ಶಿವಪಥ ಗುರುಪಥ
ಮಾಮನೆ ಅಂತಃಕರುಣ !
ಅನುಭವ ಮಂಟಪ ಸೂಳ್ನುಡಿ ತೇಜವು
ಲೋಕಕೆ ಅಮೃತ ಪಾನ !

ಚಂದ್ರಗೌಡ ಕುಲಕರ್ಣಿ
೯೪೪೮೭೯೦೭೮೭

No comments: