ಹರಿಹರ
ಮನುಜರ ಮೇಲೆ ಸಾವರ ಮೇಲೆ
ಕಾವ್ಯ ಬರೆಯದ ಧೀಮಂತ !
ಚಂದ್ರಧರನಿಗೆ ನಾಲಿಗೆ ಮಾರಿದ
ಭಕ್ತಾಗ್ರೇಸರ ಗುಣವಂತ !
ಬಡವರ ಮನೆಯ ತೊತ್ತಾಗಿದ್ದ
ರಗಳೆಗೆ ಕಟ್ಟಿದ ಹಿರಿಪಟ್ಟ !
ಶರಣ ಚರಿತೆಯ ಸುಂದರ ಕಥನವ
ದೇಸಿ ನುಡಿಯಲಿ ಹರಿಬಿಟ್ಟ !
ದುಂಬಿ ಎರಗದ ಗಾಳಿ ಅಲುಗದ
ಮೀಸಲು ಹೂಗಳು ದಿನನಿತ್ಯ !
ಹಂಪೆ ಅರಸಗೆ ಏರಿಸುತಿದ್ದ
ಮೌನದಿ ಮಾತನು ಆಡುತ್ತ !
ಬೇಡ ಕಣ್ಣಪ್ಪ ಅಕ್ಕ ನಂಬಿಗೆ
ಬಸವರಾಜನೆ ಮಾಣಿಕ್ಯ !
ಪ್ರೌಢ ಕಾವ್ಯ ಚಂಪು ಕೃತಿಯಲಿ
ಗಿರಿಜೆಯ ಪಾತ್ರದ ಸಾರ್ಥಕ್ಯ !
ರಗಳೆ ಚಂಪು ಶತಕವ ರಚಿಸಿದ
ಶರಣ ಸಂಸ್ಕೃತಿ ಹರಿಕಾರ !
ಷಟ್ಪದಿ ಜನಕ ರಾಘವಾಂಕಗೆ
ನೀಡಿದ ವಾಙ್ಮಯ ಸಂಸ್ಕಾರ !
ಚಂದ್ರಗೌಡ ಕುಲಕರ್ಣಿ
೧೯-೦೫-೨೦೨೦
No comments:
Post a Comment