Wednesday, May 27, 2020

ಕವಿರತ್ನ - ೬

ಕವಿರತ್ನ

ಮುದ್ರೆಯ ಒಡೆದು ಬಳಸಿಬಿಟ್ಟನು
ಸರಸ್ವತಿ ಶಬ್ದ ಭಂಡಾರ !
ಸಿಡಿಲ ಶಕ್ತಿಯ ಸತ್ವವ ತುಂಬುತ
ಕಾವ್ಯ ಕಟ್ಟಿದ ಭರಪೂರ !

ಆದಿಶೇಷನ ಹೆಡೆಯ ರತ್ನವು
ಗದಾಯುದ್ಧ ಕೃತಿಯನ್ನ !
ಪರಿಕಿಪರಾರು ಎಂಟೆದೆ ಬಂಟರು
ಸವಾಲು ಹಾಕಿದ ಕವಿರನ್ನ !

ಜಲಮಂತ್ರವನು ಉಪದೇಶಿಸಿದ
ಇಚ್ಛಾಮರಣಿ ಕಲಿಭೀಷ್ಮ !
ಹಿಂದಡಿಯಿಟ್ಟು ಕೊಳದಲಿ ಅಡಗಿದ
ಬರಲಿ ಎಂದು ಬಲರಾಮ !

ಸಿಂಹ ಗರ್ಜನೆ ಮಾಡುತ ಗುಡುಗಿದ
ಭೀಕರ ಕಾಲ ಭೈರವನು !
ನೀರಲ್ಲಿದ್ದರೂ ಬೆವೆತು ಹೋದನು
ಕುರುಯುವರಾಜ ಕೌರವನು !

ದುಶ್ಶಾಸನನೆದೆ ರಕ್ತವ ಲೇಪಿಸಿ
ಸಿರಿಮುಡಿ ಕಟ್ಟಿದ ಕಲಿಭೀಮ !
ದ್ರೌಪದಿ ಸೇಡಿಗೆ ದುರ್ಯೋಧನನ
ತೊಡೆಗಳ ಮುರಿದ ಉದ್ದಾಮ !

೯-೨-೨೦೨೦

No comments: