Sunday, May 15, 2016

ಮರದ ಅಳಲು.....

ಇತ್ತೀಚೆಗೆ ತಾಳಿಕೋಟೆ ಖಾಸ್ಗತನಗರ ಉದ್ಯಾನವನದಲ್ಲಿ ಇರಿಸಿದ ರಬ್ಬರ ಪೈಪುಗಳು ಉರಿದು ಪಕ್ಕದ ಮರಗಳನ್ನೂ ಸುಟ್ಟು ಕರಕಲು ಮಾಡಿದವು.

ಮರದ ಅಳಲು.....

ಬಿರುಬಿಸಿಲ ತಾಪವನು ಮರೆದುನಾ ಹಸಿರಿನ
ನೆರಳನ್ನೆ ಹಾಸಿ ನಲಿತಿದ್ದೆ! ಕಿಡಗೇಡಿ
ಉರಿಹಚ್ಚಿ  ಘಾತ ಮಾಡಿದ!

ರಬ್ಬರಿನ ಪೈಪುಗಳು ಹಬ್ಬಿಸಿ ಹೊಗೆಯನ್ನು
ಮಬ್ಬು ಕವಿಸಿದವು ನಡುಹಗಲು! ಜೀವನವು
ಗಬ್ಬೆದ್ದು ಹೋತು   ಚಣದಲ್ಲಿ   !

ಸುಡುಬೆಂಕಿ ಜ್ವಾಲೆಯು ಹೆಡೆಯೆತ್ತಿ ತೂರಾಡಿ
ನಡುಹಗಲು ಹೊತ್ತು   ಉರಿಯಿತು  ! ನನಜೀವ
ಮಿಡುಕುತ್ತ ಬೆಂದುಹೋಯಿತು  !

No comments: